ಪ್ರಧಾನಿ ಅವರು ಬಿಡುಗಡೆ ಮಾಡಿದ PM SVANidhi ಕ್ರೆಡಿಟ್ ಕಾರ್ಡ್ ಬಡ ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕವಾಗಿ ದೊಡ್ಡ ನೆರವಾಗಲಿದೆ. ಈ ಕಾರ್ಡ್ ಅನ್ನು UPI ಗೆ ಲಿಂಕ್ ಮಾಡಬಹುದಾಗಿದೆ, ಇದರಿಂದ ಡಿಜಿಟಲ್ ವಹಿವಾಟುಗಳನ್ನು ಇನ್ನಷ್ಟು ಸುಲಭವಾಗಿ ನಡೆಸಬಹುದು. ಇದು ’ಬಡ್ಡಿರಹಿತ, ರಿವಾಲ್ವಿಂಗ್ ಕ್ರೆಡಿಟ್ ಸೌಲಭ್ಯವಾಗಿದ್ದು, ಬೀದಿ ವ್ಯಾಪಾರಿಗಳು, ಬೀದಿ ಬಂಡಿ ನಿರ್ವಾಹಕರು ಮತ್ತು ಪಾದಚಾರಿ ಮಾರ್ಗದ ಮಾರಾಟಗಾರರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.
ಉದ್ಯೋಗಾವಕಾಶಗಳಿಗೆ ಹೊಸ ಚೈತನ್ಯ!
ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಪ್ರಧಾನಿ ಮೋದಿ ಅವರು ಮೂರು ಅಮೃತ ಭಾರತ್ ಎಕ್ಸ್ಪ್ರೆಸ್ ರೈಲುಗಳು ಹಾಗೂ ತ್ರಿಶೂರ್–ಗುರುವಾಯೂರ್ ಪ್ಯಾಸೆಂಜರ್ ರೈಲು ಸೇವೆಯನ್ನು ಉದ್ಘಾಟಿಸಿದರು. ಈ ಹೊಸ ರೈಲು ಸೇವೆಗಳು ಕೇರಳವನ್ನು ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಂತಹ ನೆರೆಯ ರಾಜ್ಯಗಳೊಂದಿಗೆ ಹೆಚ್ಚು ಸಮೀಪಕ್ಕೆ ತರುವ ಉದ್ದೇಶ ಹೊಂದಿವೆ. ಇದರಿಂದ ಪ್ರಾದೇಶಿಕ ಸಂಪರ್ಕ ಸುಧಾರಿಸುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳಿಗೆ ಹೊಸ ಚೈತನ್ಯ ಸಿಗಲಿದೆ.
ಬಡವರಿಗೆ ಆರ್ಥಿಕ ನೆರವು!
ಪ್ರಧಾನಿ ಅವರು ಬಿಡುಗಡೆ ಮಾಡಿದ PM SVANidhi ಕ್ರೆಡಿಟ್ ಕಾರ್ಡ್ ಬಡ ಹಾಗೂ ಸಣ್ಣ ವ್ಯಾಪಾರಿಗಳಿಗೆ ಆರ್ಥಿಕವಾಗಿ ದೊಡ್ಡ ನೆರವಾಗಲಿದೆ. ಈ ಕಾರ್ಡ್ ಅನ್ನು UPI ಗೆ ಲಿಂಕ್ ಮಾಡಬಹುದಾಗಿದೆ, ಇದರಿಂದ ಡಿಜಿಟಲ್ ವಹಿವಾಟುಗಳನ್ನು ಇನ್ನಷ್ಟು ಸುಲಭವಾಗಿ ನಡೆಸಬಹುದು. ಇದು ’ಬಡ್ಡಿರಹಿತ, ರಿವಾಲ್ವಿಂಗ್ ಕ್ರೆಡಿಟ್ ಸೌಲಭ್ಯವಾಗಿದ್ದು, ಬೀದಿ ವ್ಯಾಪಾರಿಗಳು, ಬೀದಿ ಬಂಡಿ ನಿರ್ವಾಹಕರು ಮತ್ತು ಪಾದಚಾರಿ ಮಾರ್ಗದ ಮಾರಾಟಗಾರರಿಗೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.
ಪ್ರಧಾನಮಂತ್ರಿ ಸ್ವಾನಿಧಿ ಕ್ರೆಡಿಟ್ ಕಾರ್ಡ್, ತಮ್ಮ ಮೊದಲ ಎರಡು PM SVANidhi ಸಾಲಗಳನ್ನು ಯಶಸ್ವಿಯಾಗಿ ಮರುಪಾವತಿಸಿದ ಅರ್ಹ ಬೀದಿ ವ್ಯಾಪಾರಿಗಳಿಗೆ ಲಭ್ಯವಾಗುತ್ತದೆ. ಈ ಕಾರ್ಡ್ ಮೂಲಕ ಆರಂಭಿಕವಾಗಿ ₹10,000 ಕ್ರೆಡಿಟ್ ಮಿತಿ ದೊರೆಯಲಿದ್ದು, ಉತ್ತಮ ಬಳಕೆ ಮತ್ತು ಮರುಪಾವತಿಯ ಆಧಾರದಲ್ಲಿ ಇದನ್ನು ₹30,000 ವರೆಗೆ ಹೆಚ್ಚಿಸಬಹುದು. ಕಾರ್ಡ್ಗೆ 5 ವರ್ಷಗಳ ಮಾನ್ಯತೆ ಇರುತ್ತದೆ. ದೈನಂದಿನ ವ್ಯಾಪಾರ ಅಗತ್ಯಗಳಿಗೆ ಇದು ತಕ್ಷಣದ ಹಣಕಾಸು ನೆರವು ನೀಡುವ ವ್ಯವಸ್ಥೆಯಾಗಿದೆ.
ಆರ್ಥಿಕ ಸಬಲೀಕರಣಕ್ಕೆ ಸಹಕಾರಿ; ಪ್ರಧಾನಿ!
ಈ ಕ್ರೆಡಿಟ್ ಕಾರ್ಡ್ ಅನ್ನು ದೇಶದ ವಿವಿಧ ಬ್ಯಾಂಕುಗಳು ವಿತರಿಸಲಿದ್ದು, ಅರ್ಹ ಬೀದಿ ವ್ಯಾಪಾರಿಗಳು ಸುಲಭವಾಗಿ ಇದರ ಲಾಭ ಪಡೆಯಬಹುದು. ಪ್ರಧಾನಿಯವರು ಈ ಯೋಜನೆಯನ್ನು ಕೇರಳದಿಂದ ಪ್ರಾರಂಭವಾದ ರಾಷ್ಟ್ರವ್ಯಾಪಿ ಕಲ್ಯಾಣ ಕಾರ್ಯಕ್ರಮದ ಆರಂಭಿಕ ಹೆಜ್ಜೆ ಎಂದು ಬಣ್ಣಿಸಿ, ಇದು ದೇಶಾದ್ಯಂತ ಬಡವರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.