ನಟಿ ಮೇಘನ ರಾಜ್ ಎರಡನೆಯ ಮದುವೆಯ ಬಗ್ಗೆ ಅವರ ತಂದೆ ಸುಂದರ್ ರಾಜ್ ಮಾತನಾಡಿದ್ದಾರೆ ಮಗಳ ಬದುಕಿನ ನಿರ್ಧಾರ ಅವಳದ್ದೆ ಎಂದಿರುವ ಅವರು ಪ್ರತಿಯೊಬ್ಬರಿಗೂ ಸಹ ಬಾಳ್ವೆ ಅಗತ್ಯ ಎಂದು ಹೇಳಿದ್ದಾರೆ ಮದುವೆಯ ಬಗ್ಗೆ ಅವರು ಹೇಳಿದ್ದೇನು ನಟಿ ಮೇಘನ ರಾಜ್ ಸದ್ಯ ಮಗನ ಆರೈಕೆಯಲ್ಲಿ ಕಾಲ ಕಳೆಯುತ್ತಿದ್ದಾರೆ ಜೊತೆಗೆ ಚಿತ್ರರಂಗದಲ್ಲಿಯೂ ಆಕ್ಟಿವ್ ಆಗಿದ್ದಾರೆ ಮಗ ರಾಯನ್ ಸರ್ಜ ಹೊಟ್ಟೆಯಲ್ಲಿ ಇರುವಾಗಲೇ ಮೇಘನ ಅವರು ಪತಿ ಚಿರು ಸರ್ಜ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ತಿಳಿದೆ ಇದೆ ಅವರು ಅಗಲಿದ ಮೇಲೆ ಕುಟುಂಬಕ್ಕೆ ಬೆಳಕಾಗಿ ಬಂದಿದ್ದು ರಾಯನ್. ಮೇಘನ ಹೊಟ್ಟೆಯಲ್ಲಿ ಚಿರು ಹುಟ್ಟಿ ಬರಬೇಕು ಎಂಬ ಅಸಂಖ್ಯ ಅಭಿಮಾನಿಗಳ ಆಸೆ ಈಡೇರಿತು.
2020ರ ಜೂನ್ ನಲ್ಲಿ ಚಿರು ಅವರು ನಿಧನರಾದರು. ಅಂದಿನಿಂದ ಇಂದಿನವರೆಗೂ ಮೇಘನ ರಾಜ್ ಇನ್ನೊಂದು ಮದುವೆಯಾಗಬೇಕು ಎನ್ನುವುದು ಅವರ ಬಹುತೇಕ ಅಭಿಮಾನಿಗಳ ಮಾತು. ಚಿರು ನಿಧನರಾಗಿ ಆರು ವರ್ಷಗಳಾಗುತ್ತಾ ಬಂದರು ಮೇಘನ ಇದುವರೆಗೆ ತಮ್ಮ ಮತ್ತೊಂದು ಮದುವೆಯ ಬಗ್ಗೆ ಏನು ಹೇಳಿರಲಿಲ್ಲ. ಇದೀಗ ಅವರ ತಂದೆ ಸ್ಯಾಂಡಲ್ವುಡ್ ಹಿರಿಯ ನಟ ಸುಂದರ್ ರಾಜ್ ಅವರು ಮಗಳು ಮದುವೆಯ ಬಗ್ಗೆ ಮಾತನಾಡಿದ್ದಾರೆ. ಆಯ್ಕೆ ಅವರದ್ದು ಬದುಕು ನಡೆಸುವವರು ಅವರದ್ದು ಆದ್ದರಿಂದ ಆಕೆಯ ನಿರ್ಧಾರವೇ ನಮ್ಮ ನಿರ್ಧಾರ ಎಂದಿದ್ದಾರೆ. ಸಮಾಜಕ್ಕೆ ನಾವು ಮಾದರಿಯಾಗಿ ಬದುಕಬೇಕು ಯಾರು ನಮ್ಮ ಬಗ್ಗೆ ತಪ್ಪಾಗಿ ಮಾತನಾಡಬಾರದು ಇದರ ನಡುವೆಯೇ ಸುಂದರ ಬದುಕಿನ ಆಯ್ಕೆಯನ್ನು ಮಾಡಿಕೊಳ್ಳಬೇಕು ಎಂದಿದ್ದಾರೆ. ಪ್ರತಿಯೊಬ್ಬ
ಗಂಡಿಗೂ ಒಬ್ಬ ಹೆಣ್ಣು ಬೇಕು ಹಾಗೆಯೇ ಹೆಣ್ಣಿಗೆ ಒಬ್ಬ ಗಂಡು ಬೇಕು ಹಾಗೆಂದು ಇದು ದೈಹಿಕ ಸಂಬಂಧಕ್ಕೆ ಸೀಮಿತವಲ್ಲ ಗಂಡ ಮತ್ತು ಹೆಣ್ಣಿನದ್ದು ಮಾನಸಿಕ ದೇವಸ್ಥಾನದ ಸಂಬಂಧವದು ಈ ಒಂದು ಭಾವನೆಯಲ್ಲಿ ಬದುಕಬೇಕು ಸಹಬಾಳ್ವೆ ಇರಬೇಕು ಕೈ ಹಿಡಿದು ನಡೆಯಬೇಕು ಗಂಡು ಮತ್ತು ಹೆಣ್ಣು ಎನ್ನುವುದು ದೈವ ನಿಯಮ ಅದು ಪ್ರಕೃತಿ ನಿಯಮ ಯಾರು ಒಬ್ಬರು ಮನಸ್ಸನ್ನು ನೋಯಿಸದೆ ಬದುಕಬೇಕು ಎನ್ನುವ ಮೂಲಕ ತಮ್ಮ ಮಗಳ ಬಾಳಿನಲ್ಲಿ ಮತ್ತೊಂದು ಜೀವ ಬರಲಿ ಎನ್ನುವ ಆಶಯವನ್ನು ಅಪ್ಪನಾಗಿ ಸುಂದರ್ ರಾಜ್ ಬಯಸುತ್ತಿದ್ದಾರೆ ತಮ್ಮ ಮದುವೆಯ ಕುರಿತು ಹರಡಿದ್ದ ಗಾಸಿಪ್ಗಳಿಗೆ ನೋವಿನಿಂದ ಮೇಘನರಾಜ್ ಈ ಹಿಂದೆ ಉತ್ತರ ಕೊಟ್ಟಿದ್ದು ಇದೆ ಪ್ರೀತಿ ಕಂಡುಕೊಳ್ಳುವ ಬಗ್ಗೆ ಸದ್ಯ ಏನು ಮನಸ್ಸಿನಲ್ಲಿ
ಇಲ್ಲ ಬಹುಶಃ ಅದು ಮುಂದೆ ಬಂದರು ಬರಬಹುದು ಎಂದಿದ್ದರು ಈ ಬಗ್ಗೆ ತುಂಬಾ ಮಂದಿ ನನ್ನ ಬಳಿ ಮಾತನಾಡುತ್ತಾರೆ ಮತ್ತೊಂದು ಮದುವೆಯ ವಿಷಯದ ಬಗ್ಗೆ ಪ್ರಸ್ತಾಪ ಮಾಡ್ತಾರೆ ಆದರೆ ಸದ್ಯ ಇನ್ನೊಂದು ಲವ್ ಬಗ್ಗೆ ನಾನು ಮಾನಸಿಕವಾಗಿ ರೆಡಿ ಆಗಿಲ್ಲ ಆದರೆ ಫಿಸಿಕಲ್ ಆಗಿ ಚಿರಂಜೀವಿ ಸರ್ಜರನ್ನು ಮಗ ನೋಡಿಲ್ಲ ಆದರೆ ಅಪ್ಪ ಅನ್ನೋರು ಇದ್ದಾರೆ ಅನ್ನೋದು ಅವನಿಗೆ ಗೊತ್ತಿದೆ ಆದರೆ ರಾಯನ್ಗೆ ಫಿಸಿಕಲ್ ಆಗಿ ತಂದೆ ಫಿಗರ್ ಇದ್ದರೆ ಚೆನ್ನ ಅಂತ ಕೆಲ ಬಾರಿ ಅನಿಸುತ್ತಿದೆ ಎಂದಿದ್ದರು ನನ್ನ ಜೀವನಕ್ಕೆ ಸಂಗಾತಿಯಾಗಿ ಯಾರು ಬರಬಹುದು ಅಂತ ಐಡಿಯಾ ಇಲ್ಲ ನನ್ನ ಲೈಫ್ ನಲ್ಲಿ ಯಾರು ಬರಬೇಕು ಅಂತ ಯಾರು ಬಂದ್ರೆ ಸರಿ ಅಂತ ಚಿರುವಿಗೆ ಅನಿಸಿದ್ರೆ ಅದು ನನ್ನ ಜೀವನಕ್ಕೆ ಒಳ್ಳೆಯ ನಿರ್ಧಾರ ಅಂತ ಅಂತ ಅನಿಸಿದ್ರೆ ಅದು ನಿಜವಾಗಿಯೂ ಆಗುತ್ತದೆ ಎಂದು ಅವರು ಹೇಳಿದ್ದಾರೆ ಅಂದಹಾಗೆ ನಟಿ ಪ್ರಮೀಳ ಸುಂದರ್ ರಾಜ್ ದಂಪತಿ ಕೂಡ ಮಗಳಿಗೆ ಇನ್ನೊಂದು ಮದುವೆ ಆಗಬೇಕು ಅವಳಿಗೆ ಸಂಗಾತಿ ಬೇಕು ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ